ಬಿಜೆಪಿಯವರ ಆಕ್ಸಿಜನ್ ಟಿಪ್ಪು, ಪಾಕಿಸ್ತಾನ, ಭಯೋತ್ಪಾದನೆ, ಎಸ್ ಡಿಪಿಐ : ಶಾಸಕ ಯುಟಿ ಖಾದರ್‌

ಬಿಜೆಪಿಯವರ ಆಕ್ಸಿಜನ್ ಟಿಪ್ಪು, ಪಾಕಿಸ್ತಾನ, ಭಯೋತ್ಪಾದನೆ, ಎಸ್ ಡಿಪಿಐ : ಶಾಸಕ ಯುಟಿ ಖಾದರ್‌

ಮಂಗಳೂರು: ಬಿಜೆಪಿಯವರ ಆಕ್ಸಿಜನ್ ಟಿಪ್ಪು, ಪಾಕಿಸ್ತಾನ, ಭಯೋತ್ಪಾದನೆ, ಎಸ್ ಡಿಪಿಐ ಆಗಿದೆ ಅಂಥ ಕಾಂಗ್ರೆಸ್‌ ಶಾಸಕ ಯುಟಿ ಖಾದರ್‌ ಅವರು ಕಿಡಿಕಾರಿದ್ದಾರೆ.

ಅವರು ಇಂದು ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತ ಈ ಬಗ್ಗೆ ತಿಳಿಸಿದರು.

ಇದೇ ವೇಳೇಅ ವರು ಮಾತನಾಡಿ, ಮೀನುಗಾರರಿಗೆ ಕಳೆದ ಬಜೆಟ್ ನಲ್ಲಿ ಘೋಷಿಸಿದ ಮನೆಗಳು ಇನ್ನೂ ನಿರ್ಮಾಣ ಆಗಿಲ್ಲ. ಸಮುದ್ರದ ತೀರದಲ್ಲಿ ಕೊಂಡಿ ರಸ್ತೆ, ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರವನ್ನು ಕೊಟ್ಟಿಲ್ಲ, ಇದಲ್ಲದೇ ಮೀನುಗಾರರಿಗೆ ಸಬ್ಸಿಡಿ ಸೀಮೆ ಎಣ್ಣೆಯನ್ನೂ ಕೊಟ್ಟಿಲ್ಲ,ಈಗ ಡಿಸೇಲ್ ಬಗ್ಗೆ ಹೇಳುತ್ತಿರುವುದು ಹಾಸ್ಯಸ್ಪದ ಅಂತ ತಿಳಿಸಿದರು. ಇನ್ನೂ ಬಜೆಟ್ ನಲ್ಲಿ ಕರಾವಳಿ ಪ್ರದೇಶದ ಜನತೆಗೆ ಮೋಸವಾಗಿದೆ.‌ ಮೀನುಗಾರರಿಗೆ ಹಿಂದೆ ಘೋಷಿಸಿದ ಯೋಜನೆಗಳನ್ನೇ ಕಾರ್ಯರೂಪಕ್ಕೆ ತಂದಿಲ್ಲ, ಈ ಹಿಂದೆ ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದ ಮಾತು ಸಿಎಂಗೆ ನೆನಪು ಇರಬೇಕು ಅದಕ್ಕೆ ಅವರು ಜಿಲ್ಲೆಗೆ ಯಾವುದೇ ಪ್ಯಾಕೇಜ್‌ ನೀಡಿಲ್ಲ ಅಂಥ ವ್ಯಂಗ್ಯವಾಡಿದರು. ನಮ್ಮ ಸರ್ಕಾರ ಇರುವಾಗ ಭಾರತ-ಪಾಕ್ ಕ್ರಿಕೆಟ್ ಬೇಡ. ಈಗ ಮಾತ್ರ ಎರಡೂ ತಂಡವನ್ನು ದುಬೈನಲ್ಲಿ ಕೊಂಡು ಹೋಗಿ ಆಡಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.