ರಾಜ್ಯದಲ್ಲಿ ಕೇವಲ ಒಂದೂವರೆ ತಿಂಗಳಿನಲ್ಲೇ 7,361 ಪಾತಕಿಗಳಿಗೆ ರೌಡಿಪಟ್ಟಿಯಿಂದ ಮುಕ್ತಿ

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ಕೆಲವು ತಿಂಗಳು ಬಾಕಿ ಇದ್ದಾವೆ. ಚುನಾವಣೆಗೂ ಮುನ್ನವೇ ರೌಡಿ ಶೀಟರ್ ಗಳಿಗೆ ಎಚ್ಚರಿಕೆ ಕೊಟ್ಟು, ಕಾನೂನು ಸುವ್ಯವಸ್ಥೆ ಪಾಲಿಸೋ ಸೂಚನೆ ನೀಡಬೇಕಿದ್ದಂತ ಸರ್ಕಾರದಿಂದಲೇ ಕೇವಲ ಒಂದೂವರೆ ತಿಂಗಳಿನಲ್ಲಿಯೇ 7,361 ಪಾತಕಿಗಳಿಗೆ ರೌಡಿಪಟ್ಟಿಯಿಂದ ಮುಕ್ತಿ ನೀಡಲಾಗಿದೆ.
ಈ ಕುರಿತಂತು ರಾಜ್ಯ ಸರ್ಕಾರದ ಮೂಲಕಗಳಿಂದ ಮಾಹಿತಿ ತಿಳಿದು ಬಂದಿದ್ದು, ಜನವರಿ 2023ರಿಂದ ಫೆಬ್ರವರಿ 2023ರ ನಡುವಿನ ಒಂದೂವರೆ ತಿಂಗಳಿನಲ್ಲಿ ರಾಜ್ಯದಲ್ಲಿ 7,361 ಪಾತಕಿಗಳನ್ನು ರೌಡಿಪಟ್ಟಿಯಿಂದ ಮುಕ್ತಿಗೊಳಿಸಿರೋದಾಗಿ ಎಂದು ಹೇಳಲಾಗುತ್ತಿದೆ.
ಅಂದಹಾಗೇ ರೌಡಿಪಟ್ಟಿಯಿಂದ ಪಾತಕಿಗಳನ್ನು ಬಿಟ್ಟಿರುವ ಜಿಲ್ಲೆಗಳಲ್ಲಿ ಮಂಡ್ಯ, ಮಂಗಳೂರು, ಬೀದರ್ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲೇ ಸಿಂಹಪಾಲು ಆಗಿದೆ. ಉತ್ತರ ಕನ್ನಡ -529, ಮಂಡ್ಯ 610, ಮಂಗಳೂರು 781 ಹಾಗೂ ಬೀದರ್ ಜಿಲ್ಲೆಯಲ್ಲಿ 519 ಪಾತಕಿಗಳನ್ನು ರೌಡಿ ಶೀಟರ್ ಪಟ್ಟಿಯಿಂದ ಕೈಬಿಡಲಾಗಿದೆ.
ಇದಲ್ಲದೇ ಬೆಂಗಳೂರು 17, ಮೈಸೂರು 350, ಚಿತ್ರದುರ್ಗ 319, ವಿಜಯಪುರ 215, ಶಿವಮೊಗ್ಗ 207, ಹಾವೇರಿ 266, ಹಾಸನ 350 ಸೇರಿದಂತೆ ಒಟ್ಟು 7,361 ಪಾತಕಿಗಳನ್ನು ರೌಡಿಶೀಟರ್ ಪಟ್ಟಿಯಿಂದ ಕೈಬಿಡಲಾಗಿದೆ.
ಒಂದೂವರೆ ತಿಂಗಳಿನಲ್ಲಿಯೇ ಇಷ್ಟು ಪಾತಕಿಗಳಿಗೆ ರೌಡಿ ಶೀಟರ್ ಪಟ್ಟಿಯಿಂದ ಮುಕ್ತಿ ನೀಡಿದ್ದು ಅಚ್ಚರಿಯನ್ನು ಉಂಟು ಮಾಡಿದ್ದು, ಚುನಾವಣೆ ಹೊಸ್ತಿನಲ್ಲಿ ಸರ್ಕಾರ ಮಾಡಿದ್ದು ಸರಿಯೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.