ಲಾಡ್ಲೇ ಮಶಾಕ್ ದರ್ಗಾ ಹೇಗೆ ಪವಿತ್ರವೋ ಹಾಗೆ ರಾಘವ ಚೈತನ್ಯ ಲಿಂಗ ಅಷ್ಟೇ ಪವಿತ್ರ: ಸಿದ್ದಲಿಂಗ ಸ್ವಾಮೀಜಿ

ಕಲಬರಗಿ: ಜಿಲ್ಲೆಯ ಆಳಂದದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಮಹಾಸಂಗಮ ಕಾರ್ಯಕ್ರಮ ನಡೆದಿದೆ. ಈ ವೇಳೆ ಸಿದ್ದಲಿಂಗ ಸ್ವಾಮೀಜಿ ಪ್ರತಿಕ್ರಿಯೆ ನೀಡಿದ್ದಾರೆ.
ಲಾಡ್ಲೇ ಮಶಾಕ್ ದರ್ಗಾ ಹೇಗೆ ಪವಿತ್ರವೋ ನಮಗೆ ರಾಘವ ಚೈತನ್ಯ ಲಿಂಗ ಅಷ್ಟೇ ಪವಿತ್ರವಾದುದ್ದು.
ನಗರದಲ್ಲಿ ಮಾತನಾಡಿದ ಅವರು, ನಾವು ಭಾಷಣ ಮಾಡಿದರೆ ಪ್ರಚೋದನೆ ಅಂತ ಪೊಲೀಸರು ಹೇಳುತ್ತಾರೆ, ಪ್ರತಿ ಶುಕ್ರವಾರ ಮಸೀದಿಗಳಲ್ಲಿ ಗಂಟಲ ಹರಕೊಂಡು ಭಾಷಣ ಮಾಡುತ್ತಾರೆ. ಅದು ಪ್ರಚೋದನೆ ಅಲ್ವಾ? ಎಂದು ಪ್ರಶ್ನಿಸಿದ್ದಾರೆ.ಕಳೆದ ವರ್ಷ ಪೊಲೀಸರು ಯಾಕೆ ಘರ್ಷಣೆಯನ್ನು ತಪ್ಪಿಸಲಿಲ್ಲಾ? ನಮ್ಮ ಮೇಲೆ ಕೇಸ್ ಹಾಕಿದಾಗ ನಮ್ಮ ಗಾಡಿ ಮತ್ತಷ್ಟು ಸ್ಪೀಡ್ ಆಗುತ್ತದೆ. ಹಿಂದೂಗಳು ಎದ್ದರೆ ವೀರಭದ್ರ, ಮಲಗಿದ್ರೆ ಕುಂಬಕರ್ಣ. ನಮಗೆ ಪೂಜೆಗೆ ಅವಕಾಶ ನೀಡಿದ್ದಕ್ಕೆ ಉರುಸ್ ಮಾಡುವವರಿಗೆ ತುರಿಕೆ ಆರಂಭವಾಗಿತ್ತು ಎಂದು ಸಿದ್ದಲಿಂಗ ಸ್ವಾಮೀಜಿ ಹೇಳಿದರು.