ಸಿದ್ದರಾಮಯ್ಯ ಮುಂದಿನ ಸಿಎಂ ಆಗಬೇಕು - ಶಾಸಕ ಭೈರತಿ ಸುರೇಶ್

ಸಿದ್ದರಾಮಯ್ಯ ಮುಂದಿನ ಸಿಎಂ ಆಗಬೇಕು - ಶಾಸಕ ಭೈರತಿ ಸುರೇಶ್

ಕೊಪ್ಪಳ: ಇಂದು ಜಿಲ್ಲೆಯ ಯಲಬುರ್ಗಾದಲ್ಲಿ ನಡೆದಂತ ಕುರುಬರ ಸಮಾವೇಶದಲ್ಲಿ ಮುಂದಿನ ಸಿಎಂ ಸಿದ್ಧರಾಮಯ್ಯ ಎಂಬ ಸದ್ದು ಜೋರಾಗಿಯೇ ಕೇಳಿ ಬಂದಿದೆ. ಅದರಲ್ಲೂ ಶಾಸಕ ಭೈರತಿ ಸುರೇಶ್ ಸೇರಿದಂತೆ ಹಲವು ಕೈ ಮುಖಂಡರು ಮುಂದಿನ ಸಿಎಂ ಸಿದ್ಧರಾಮಯ್ಯ ಆಗಬೇಕು ಎಂಬುದಾಗಿ ಒಕ್ಕೊರಲಿನಿಂದ ಒತ್ತಾಯಿಸಿದ್ದಾರೆ.

ಯಲಬುರ್ಗಾದಲ್ಲಿ ಕುರುಬರ ಸಮಾವೇಶಕ್ಕೂ ಮುನ್ನಾ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯ ಅನಾವರಣ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ, ಉದ್ಘಾಟನೆಯ ಬಳಿಕ ಮಾತನಾಡಿದಂತ ಶಾಸಕ ಬೈರತಿ ಸುರೇಶ್, ಸಿದ್ಧರಾಮಯ್ಯ ದೇಶದ ಅಭಿವೃದ್ಧಿಗಾಗಿ ಅನೇಕ ಕೆಲಸ ಮಾಡಿದ್ದಾರೆ. ಹಲವು ಭಾಗ್ಯಗಗಳನ್ನು ನೀಡಿದ್ದಾರೆ. ಅವರಂತ ಪ್ರಾಮಾಣಿಕ ರಾಜಕಾರಣಿ ಬೇರೊಬ್ಬರಿಲ್ಲ. ಹೀಗಾಗಿ ಹಿಂದಿನ ಎಲ್ಲಾ ಅಭಿವೃದ್ಧಿ ಕೆಲಸಗಳು ಮರಳಿ ಬರಬೇಕು ಅಂದರೇ ಸಿದ್ಧರಾಮಯ್ಯ ಮುಂದಿನ ಮುಂಖ್ಯಮಂತ್ರಿ ಆಗಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಅಭಿವೃದ್ಧಿಯ ಕೆಲಸಗಳು ಆಗಬೇಕು ಅಂದರೇ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗುವುದು ಸೂಕ್ತ ಎಂಬುದಾಗಿ ತಮ್ಮ ಭಾಷಣದ ವೇಳೆಯಲ್ಲಿ ಡಯಾಸ್ ಕುಟ್ಟಿ ಹೇಳಿದರು.