ಸಾಕಪ್ಪಾ ಸಾಕು-ಕಿವಿ ಮೇಲೆ ಹೂವ' : ಕಾಂಗ್ರೆಸ್ ಹೊಸ ಅಭಿಯಾನಕ್ಕೆ ಬಿಜೆಪಿ ಕೆಂಡಮಂಡಲ

ಬೆಂಗಳೂರು: 'ಪೇ ಸಿಎಂ ಅಭಿಯಾನ ಬಳಿಕ ಕಿವಿ ಮೇಲೆ ಹೂವ ಅಭಿಯಾನವನ್ನು ಕಾಂಗ್ರೆಸ್ ಶುರುಮಾಡಿದೆ. ಸಾಕಪ್ಪಾ ಸಾಕು-ಕಿವಿ ಮೇಲೆ ಹೂವ' ಎನ್ನುವ ಹೊಸ ಅಭಿಯಾನವನ್ನು ಕಾಂಗ್ರೆಸ್ ಶುರುಮಾಡಲಾಗಿದ್ದು, ಇದು ಕಾಂಗ್ರೆಸ್ಗೆ ಕೋಪ ತರಿಸಿದೆ. 'ಬಿಜೆಪಿಯೇ ಭರವಸೆ' ಎಂಬ ಪೋಸ್ಟರ್ ಅನ್ನು ಬಿಜೆಪಿ ಪಕ್ಷ ರಾಜ್ಯದ ವಿವಿಧ ಕಡೆ ಅಂಟಿಸಿದ್ದುತ್ತಿದ್ದು, ಈ ಮೂಲಕ ರಾಜ್ಯದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣೆ ನಡೆಯಲಿದ್ದು, ಪೋಸ್ಟರ್ ಮೂಲಕ ಚುನಾವಣ ಪ್ರಚಾರವನ್ನು ಹಮ್ಮಿಕೊಂಡಿದೆ.
ಇದೇ ವೇಳೇ ಕಾಂಗ್ರೆಸ್ ನಾಯಕರು ದೌರ್ಭಾಗ್ಯದಿಂದ ವೈಯಕ್ತಿಕ ಟೀಕೆ ಮಾಡ್ತಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಚುನಾವಣೆ ವೇಳೆ ಕಾಲೆಳೆಯೋದು ಹಕ್ಕು ಎಂದು ಭಾವಿಸಿದ್ದಾರೆ. ಆದರೆ, ಕಾಂಗ್ರೆಸ್ ಪಾರ್ಟಿ ಮೇಲೆ ಜನ ಹೂ ಇಟ್ಟಿದ್ದಾರೆ. ಜನ ಹೂ ಇಟ್ಟಿದ್ದು ನೋಡಿದರೆ ಕಾಂಗ್ರೆಸ್ಗೆ ಎದ್ದು ಬರಲು ಆಗದ ಪರಿಸ್ಥಿತಿ ಆಗಲಿದೆ. ಸ್ವಾತಂತ್ರ್ಯ ತಂದುಕೊಟ್ಟಿದ್ದು ನಾವೇ ಅಂತಾ ಜನರ ಕಿವಿ ಮೇಲೆ ಹೂ ಇಟ್ಟಿದ್ದರು ಕಾಂಗ್ರೆಸ್ನವರು ಎಂದರು.
ಶತಮಾನಕ್ಕೊಮ್ಮೆ ಪ್ರಧಾನಿ ನರೇಂದ್ರ ಮೋದಿ ಅವರಂತಹ ನಾಯಕರು ಸಿಗುತ್ತಾರೆ.ಅವರ ಕೈಕೆಳಗೆ ಕೆಲಸ ಮಾಡುವುದು ನನ್ನ ಸೌಭಾಗ್ಯ ಎಂದು ಜೋಶಿ ಹೇಳಿದ್ದಾರೆ.ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ಜಿಮಖಾನಾ ಮೈದಾನದಲ್ಲಿ ನಿರ್ಮಿಸಲಾಗಿರುವ ಕೇದಾರನಾಥ ಮಾದರಿಯ ಶಿವಲಿಂಗ ದರ್ಶನ ಪಡೆದರು.