ಧಾನಿ ಮೋದಿ ವಿರುದ್ಧ ಹೇಳಿಕೆ ; 'ಪವನ್ ಖೇಡಾ' ವಿರುದ್ಧದ ಎಲ್ಲಾ 'FIR' ಲಕ್ನೋಗೆ ವರ್ಗಾಯಿಸಲು 'ಸುಪ್ರೀಂ' ಆದೇಶ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ತಂದೆಯ ಬಗ್ಗೆ ಅಸಭ್ಯ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಪವನ್ ಖೇರಾ ವಿರುದ್ಧ ದಾಖಲಾಗಿರುವ ಎಲ್ಲಾ ಎಫ್ಐಆರ್ಗಳನ್ನು ಲಕ್ನೋದ ಹಜರತ್ಗಂಜ್ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ.
ಖೇಡಾ ವಿರುದ್ಧ ಅಸ್ಸಾಂನಲ್ಲಿ ಒಂದು ಮತ್ತು ಯುಪಿಯಲ್ಲಿ 2 ಸೇರಿದಂತೆ ಒಟ್ಟು 3 ಎಫ್ಐಆರ್ಗಳು ದಾಖಲಾಗಿವೆ. ಫೆಬ್ರವರಿ 23 ರಂದು ಅಸ್ಸಾಂ ಪೊಲೀಸರು ಅವರನ್ನ ದೆಹಲಿಯಲ್ಲಿ ಬಂಧಿಸಿದರು, ಆದರೆ ಅವರ ಹೇಳಿಕೆಯ ಬಗ್ಗೆ ಸುಪ್ರೀಂ ಕೋರ್ಟ್ನಲ್ಲಿ ಅವರ ಪರವಾಗಿ ಕ್ಷಮೆಯಾಚಿಸಲಾಯಿತು. ಇದಾದ ಬಳಿಕ ಬಂಧನದ ದಿನವೇ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿತ್ತು.
ಅಸ್ಸಾಂ ಮತ್ತು ಯುಪಿಗೆ ವಿರೋಧ.!
ಆಕ್ಷೇಪಾರ್ಹ ಹೇಳಿಕೆಗಳ ಪ್ರಕರಣದಲ್ಲಿ ದಾಖಲಿಸಲಾದ ಎಫ್ಐಆರ್ಗಳನ್ನು ಒಟ್ಟಿಗೆ ಸೇರಿಸಲು ವಿನಂತಿಸಿದ ಪವನ್ ಖೇಡಾ ಅವರ ಅರ್ಜಿಯನ್ನ ಅಸ್ಸಾಂ ಮತ್ತು ಉತ್ತರ ಪ್ರದೇಶ ಸರ್ಕಾರಗಳು ವಿರೋಧಿಸಿವೆ. ಎರಡೂ ರಾಜ್ಯಗಳ ಸರ್ಕಾರಗಳು ಖೇಡಾ ಅವರ ಮನವಿಯನ್ನು ವಿರೋಧಿಸಿದ್ದವು.