ಅವನ್ಯಾರೋ ಟಿಪ್ಪು ರೀತಿ ನನ್ನ ಮುಗಿಸಿ ಅಂತಾನೇ, ನಿಮಗೆ ಒಪ್ಪಿಗೆ ಇದ್ರೇ ನನಗೂ ಒಪ್ಪಿಗೆನಪ್ಪ: ಸಚಿವ ಅಶ್ವತ್ಥನಾರಾಯಣ ವಿರುದ್ಧ ಸಿದ್ದು ಗುಡುಗು

ಅವನ್ಯಾರೋ ಟಿಪ್ಪು ರೀತಿ ನನ್ನ ಮುಗಿಸಿ ಅಂತಾನೇ, ನಿಮಗೆ ಒಪ್ಪಿಗೆ ಇದ್ರೇ ನನಗೂ ಒಪ್ಪಿಗೆನಪ್ಪ: ಸಚಿವ ಅಶ್ವತ್ಥನಾರಾಯಣ ವಿರುದ್ಧ ಸಿದ್ದು ಗುಡುಗು

ಕೊಪ್ಪಳ: ದೇವರ ಬಳಿಯಲ್ಲಿ ಎಲ್ಲರಿಗೂ ಒಳ್ಳೇದು ಮಾಡು ಅಂತ ಕೇಳಿಕೊಳ್ಳಬೇಕು. ನಮಗೆ ಒಳ್ಳೇದು ಮಾಡಪ್ಪ ಅಂದರೇ, ನಿಮ್ಮಪ್ಪನಾಣೆಗೂ ದೇವರು ಒಳ್ಳೇದು ಮಾಡಲ್ಲ. ಅವನ್ಯಾರೋ ಟಿಪ್ಪು ರೀತಿ ನನ್ನನ್ನು ಮುಗಿಸಿ ಅಂತಾನೇ, ನಿಮಗೆ ಒಪ್ಪಿಗೆ ಇದ್ರೇ ನನಗೂ ಒಪ್ಪಿಗೇನಪ್ಪ ಎಂಬುದಾಗಿ ಸಚಿವ ಅಶ್ವತ್ಥನಾರಾಯಣ ( Minister Ashwathnarayana ) ವಿರುದ್ಧ ವಿಪಕ್ಷ ನಾಯಕ ಸಿದ್ಧರಾಮಯ್ಯ ( Siddaramaiah ) ಗುಡುಗಿದ್ದಾರೆ.

ನಗರದಲ್ಲಿ ಇಂದು ನಡೆದಂತ ಕುರುಬರ ಸಮಾವೇಶದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನನ್ನ ತಂದೆ-ತಾಯಿ ಕುರುಬರಾಗಿದ್ರು, ನಾನು ಕುರುಬನಾಗಿ ಹುಟ್ಟಿದ್ದೇನೆ. ಯಾವತ್ತೂ ಸ್ವಾರ್ಥಕ್ಕಾಗಿ ದೇವರ ಪೂಜೆ ಮಾಡಬಾರದು. ಹಾಗೆ ಮಾಡಿದ್ರೇ ದೇವರು ಒಳಿಯೋದಿಲ್ಲ ಎಂದರು.

ನೀವು ದೇವರ ಬಳಿಯಲ್ಲಿ ನನಗೆ ಒಳ್ಳೇದಾಗಲಿ ಅಂತ ಕೇಳಿದ್ರೇ, ದೇವರು ನಿಮ್ಮಪ್ಪನಾಣೆಗೂ ಒಳ್ಳೇದು ಮಾಡಲ್ಲ. ನಾವು ಸಮಾಜದಲ್ಲಿ ಬೇರೆಯವರಿಗೆ ಯಾವತ್ತೂ ಕೇಡು ಬಯಸಬಾರದು. ಎಲ್ಲರಿಗೂ ಒಳ್ಳೇಯದನ್ನೇ ಬಯಸಬೇಕು ಎಂದರು.

ಕಾನೂನು ಪಾಲನೇ ಮಾಡಬೇಕಾದ ಸಚಿವರೇ ಟಿಪ್ಪು ರೀತಿಯಲ್ಲಿ ನನ್ನನ್ನು ಮುಗಿಸಬೇಕು ಅನ್ನುತ್ತಾನೆ. ಇದೇನ್ರೀ ಬಿಜೆಪಿ ಸಂಸ್ಕೃತಿ ಎಂಬುದಾಗಿ ಕಿಡಿಕಾರಿದರು.

ಆಚಾರವೇ ಸರ್ವರ್ಗ, ಅನಾಚಾರವೇ ನರಕ ಅಂತ ಬಸವಣ್ಣನವರು ಹೇಳಿದ್ದಾರೆ. ನಾವು ಯಾವತ್ತೂ ಸತ್ಯವನ್ನು ಹೇಳಬೇಕು. ಸತ್ಯವೇ ದೇವರು. ಸತ್ಯ ಹೇಳೋದನ್ನ ರೂಡಿಸಿಕೊಳ್ಳಬೇಕು. ಅದೇ ದೇವರು ಎಂದರು.