ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್: ರಾಜ್ಯದ ಹಲವೆಡೆ ATMಗಳಲ್ಲಿ ಹಣ ಸಿಗದೇ ಗ್ರಾಹಕರ ಪರದಾಟ,RBI ಆದೇಶಕ್ಕೂ ಡೋಂಟ್ಕೇರ್

ಅವಿನಾಶ್ ಆರ್ ಭೀಮಸಂದ್ರ
ಬೆಂಗಳೂರು: ರಾಜ್ಯದಲ್ಲಿ ಶನಿವಾರ ಮತ್ತು ಶಿವರಾತ್ರಿ ಹಬ್ಬ ಭಾನುವಾರ ಬ್ಯಾಂಕ್ಗಳಿಗೆ ರಜೆ ಇರುವ ಕಾರಣ ಬ್ಯಾಂಕ್ ಗ್ರಾಹಕರು ಪರದಾಡುವ ಸನ್ನಿವೇಶ ಕಂಡು ಬಂದಿದೆ. ಶುಕ್ರವಾರ ರಾತ್ರಿಯಿಂದಲೇ ಹಲವು ಬ್ಯಾಂಕ್ಗಳ ಎಟಿಎಂಗಳಲ್ಲಿ ಹಣವಿಲ್ಲ ಸನ್ನಿವೇಶ ಕಂಡು ಬಂದಿದೆ.
ಇನ್ನೂ ಬ್ಯಾಂಕ್ ಗ್ರಾಹಕರ ಹಿತ ಕಾಯಬೇಕಾದ ಬ್ಯಾಂಕ್ಗಳು ಮಾತ್ರ ತಮಗೂ ಇದಕ್ಕೂ ಸಂಬಂಧಿವಲ್ಲದೇ ವರ್ತನೆ ಮಾಡುತ್ತಿರುವುದು ಮಾತ್ರ ವಿಪರ್ಯಾಸ.
ಬ್ಯಾಂಕ್ ಎಟಿಎಂಗಳಲ್ಲಿ ಸರಿಯಾದ ಹಣ ಸಿಗದೇ ಬ್ಯಾಂಕ್ ಗ್ರಾಹಕರು ಪರದಾಡುತ್ತಿದ್ದರು ಕೂಡ ಆರ್ಬಿಐ ಈ ಬಗ್ಗೆ ಗಮನ ಹರಿಸದೇ ಇರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ. ಈ ನಡುವೆ 2021ರಿಂದ ಅನ್ವಯವಾಗುವಂತೆ ಅಕ್ಟೋಬರ್ 1 ರಿಂದ ಎಟಿಎಂಗಳಲ್ಲಿ ನಗದು ಲಭ್ಯವಿಲ್ಲದ ಬ್ಯಾಂಕುಗಳಿಗೆ ಆರ್ಬಿಐ ದಂಡ ವಿಧಿಸಲಿದೆ ಆದರೆ ಅದು ಪತ್ರಕ್ಕೆ ಮಾತ್ರ ಸೀಮಿತವಾಗಿದೆ. ಅನೇಕ ಎಟಿಎಂಗಳು ಶನಿವಾರ ಭಾನುವಾರ ಬಂದ್ರೆ ಸಾಕು ಬಾಗಿಲು ಮುಚ್ಚಿರುವುದು ಸುಳ್ಳಲ್ಲ.
ಎಟಿಎಂಗಳಲ್ಲಿ ನಗದು ಲಭ್ಯವಿಲ್ಲದ ಕಾರಣ ಸಾರ್ವಜನಿಕರಿಗೆ ಉಂಟಾಗುವ ಅನಾನುಕೂಲತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ರಿಸರ್ವ್ ಬ್ಯಾಂಕ್, ಅಂತಹ ಯಂತ್ರಗಳಲ್ಲಿ ಕರೆನ್ಸಿ ನೋಟುಗಳನ್ನು ಸಕಾಲದಲ್ಲಿ ಮರುಪೂರಣ ಮಾಡಲು ವಿಫಲವಾದ ಬ್ಯಾಂಕುಗಳಿಗೆ ದಂಡ ವಿಧಿಸಲು ನಿರ್ಧರಿಸಿದೆ. ಆದರೆ ಇದು ಈಗಲೂ ಕೂಡ ಸರಿಯಗಿ ಕೆಲಸ ಮಾಡಲು ಅವಕಾಶವನ್ನು ನೀಡಲ್ಲ. RBI/2021-22/84 DCM (RMMT) No.S153/11.01.01/2021-22 ಹೊರಡಿಸಿರುವ ಆದೇಶದಲ್ಲಿ ಈ ಬಗ್ಗೆ ಉಲ್ಲೇಖ ಮಾಡಲಾಗಿದೆ.